ಮೂಡಂಬೈಲು ಶಾಸ್ತ್ರಿಗೆ ಗೌರವ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜೂನ್ 17 , 2015
|
ಜೂನ್ 17, 2015
|
ಮೂಡಂಬೈಲು ಶಾಸ್ತ್ರಿಗೆ ಗೌರವ ಪ್ರಶಸ್ತಿ ಪ್ರದಾನ
ಹಳೆಯಂಗಡಿ :
ಯಕ್ಷಗಾನ ತಾಳಮದ್ದಳೆಗೆ ಹಿರಿಯ ಕಲಾವಿದರು ನೀಡಿರುವ ಕೊಡು ಗೆ ಮಹತ್ವದಾಗಿದ್ದು ಕಿರಿಯರು ಇದರ ಪ್ರಯೋಜನ ಪಡೆದು ಸಾಧನೆ ಮಾಡಬೇ ಕು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಹೇಳಿದರು. ಪಾವಂಜೆಯಲ್ಲಿ ಭಾನುವಾರ ಮೂಡಂ ಬೈಲು ಗೋಪಾಲಕೃಷ್ಣ ಶಾಸ್ತ್ರಿಅವರಿಗೆ ಹರಿದಾಸ ಲಕ್ಷ್ಮೀನಾರಾಯಣಪ್ಪಯ್ಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಉಜಿರೆ ಅಶೋಕ ಭಟ್ ಅಭಿನಂದನಾ ಭಾಷಣ ಮಾಡಿ ಸ್ತ್ರೀ ಪಾತ್ರಗಳಿಗೆ ವೈಚಾರಿಕತೆ ಭಾವನೆ ತುಂಬಿದ ಶಾಸ್ತ್ರಿ ಅವರು ಸ್ತ್ರೀ ಪಾತ್ರಗಳ ಬೆಳವಣಿಗೆ ನೀಡಿದ ಕೊಡುಗೆ ದೊಡ್ಡದು. ಅವರಿಗೆ ಈ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿ, ಸಭೆಗೆ ಗೌರವ ನೀಡುವುದು ಕಲಾವಿದನ ಕರ್ತವ್ಯ. ಸಭೆಯ ಭಾವನೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದರು. ಉಮಾಕಾಂತ ಭಟ್, ಯಾಜಿ ನಿರಂಜನ್ ಭಟ್, ಹರಿದಾಸ ಲಕ್ಷೀನಾರಾ ಯಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿ ಕೆ ಅಧ್ಯಕ್ಷ ಶಶೀಂದ್ರ ಭಟ್ ಉಪಸ್ಥಿತರಿದ್ದರು.
ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆದ ಆಖ್ಯಾನ ದಶಕ ತಾಳಮದ್ದಳೆ ಸಮಾರೋಪ ನಡೆಯಿತು. ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಘಟಕ ಡಿ ಎಸ್ ಶ್ರೀಧರ್ ಅಭಿನಂದನೆ ಪತ್ರ ವಾಚಿಸಿದರು.
ಕೃಪೆ :
http://vijaykarnataka.com
|
|
|